ಸಿಈಓ(CEO) ಗಳ ಹೇಳಿಕೆ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ (AI) ನಿರುದ್ಯೋಗದ ಭಯ ಬೇಡ

ಸಿಈಓ(CEO) ಗಳ ಹೇಳಿಕೆ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ  (AI)  ನಿರುದ್ಯೋಗದ  ಭಯ ಬೇಡ

Friday November 17, 2017,

2 min Read

ಬೆಂಗಳೂರಿನ ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಇಂಟೆಲ್‌ನ MD ನಿವೃತಿ ರಾಯ್.

ಬೆಂಗಳೂರಿನ ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಇಂಟೆಲ್‌ನ MD ನಿವೃತಿ ರಾಯ್.


ತಾಂತ್ರಿಕ ಮೇಳದಲ್ಲಿ ಸೇರಿದ್ದ CEO ಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಮನುಷ್ಯರಿಗೆ ಲಾಭಗಳಿವೆಯೇ ಹೊರತು ನಿರುದ್ಯೋಗದ ಸೃಷ್ಟಿಯ ಭಯ ಬೇಡ ಎಂದರು. ಈ ತಂತ್ರಜ್ಞಾನವು ಮಾನವರಿಗೆ ಕೆಲಸ ನಿರ್ವಹಿಸಲು ಪೂರಕವಾಗಿರುವದು ಎಂದು ಹೇಳಿದರು.

ಈ ಚರ್ಚೆ ವಿಕಾಸದ ವ್ಯವಹಾರ ಮಾದರಿಗಳನ್ನು ಮತ್ತು ಈ ಹೊಸ ತಂತ್ರಜ್ಞಾನಗಳಿಂದ ಹೊರಹೊಮ್ಮುವ ಹೊಸ ಆರ್ಥಿಕತೆಗಳನ್ನು ಗುರುತಿಸಿದೆ. ಸಾಂಪ್ರದಾಯಿಕ ವ್ಯಾಪಾರ ಮಾದರಿಗಳನ್ನು ಪುನರುಜ್ಜೀವನಗೊಳಿಸುವಂತಹ ಹೊಸ ಸವಾಲುಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಬದಲಾವಣೆಗಳೊಂದಿಗೆ ತಂತ್ರಜ್ಞಾನವನ್ನು ಕೈಗೆಟುಕುವ ಅಗತ್ಯತೆ ಮತ್ತು ಕಂಪನಿಯು ಉದ್ಯಮಗಳಿಗೆ ಹೇಗೆ ಮಾಪನ ಮಾಡುತ್ತದೆ ಎಂಬ ಬಗ್ಗೆ ಸಹ ಒತ್ತು ನೀಡಿದರು.

ಸ್ಟ್ರಾಂಡ್ ಲೈಫ್ ಸೈನ್ಸ್ ನ ಅಧ್ಯಕ್ಷ ವಿಜಯ್ ಚಂದ್ರು ಐಟಿ-ಬಯೋಟೆಕ್ ಸಂಪರ್ಕಗಳ ಮೂಲಕ ದೊರೆಯುವ ಅವಕಾಶಗಳನ್ನು ಕುರಿತು ಮಾತನಾಡಿದರು. ಆರೋಗ್ಯ ಸೇವೆಗಳಲ್ಲಿ AI ನ ನಿರ್ಧಾರ-ತಯಾರಿಕೆ ಸಾಮರ್ಥ್ಯಗಳ ಮೇಲೆ, ಅವರು ಹೀಗೆ ಹೇಳಿದರು: "ಯಾವುದೇ AI ಯಲ್ಲಿನ ಪ್ರಗತಿಗಳು ವ್ಯವಸ್ಥೆಯ ಉತ್ಪಾದಕತೆ ಮತ್ತು ಪರಿಣಾಮಕಾರಿತ್ವವನ್ನು ಮಾತ್ರ ಹೆಚ್ಚಿಸುತ್ತವೆ" ಎಂದರು.

"ಹೊಸದಾಗಿ ಬಂದಿರುವ ಚಿಪ್‌ಗಳು ಮಾನವನ ಮನಸ್ಸನ್ನು ಅನುಕರಿಸಬಲ್ಲವು ಮತ್ತು ಇಂಟೆಲ್‌ನ ಎ‌ಐನಲ್ಲಿ ಕ್ರಾಂತಿಕಾರಿ ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತಿದೆ" ಎಂದು ಭಾರತದ ಡಿವಿಜನ್ ಹೆಡ್, ನಿವೃತಿ ರಾಯ್ ವಿವರಿಸಿದರು. "AI ಇಂಟೆಲ್‌ನ ಒಂದು ಭಾಗವಾಗಿದೆ, ಸುಮಾರು ಅರ್ಧ ಶತಮಾನದವರೆಗೆ ಹಲವಾರು ಇತರ ಕಂಪೆನಿಗಳೊಂದಿಗೆ, ನೇಮಕಾತಿ, ಸುರಕ್ಷತೆಗಾಗಿ AI ಅನ್ನು ಬಳಸುತ್ತಿದೆ," ಎಂದು ಅವರು ಹೇಳಿದರು.

ನಿವೃತಿ ರಾಯ್ ಮಾಡಿದ ಪ್ರಮುಖ ವಾದವೆಂದರೆ "ತಂತ್ರಜ್ಞಾನದಿಂದಾಗಿ ಉದ್ಯೋಗಗಳು ದೂರ ಹೋಗುವುದಿಲ್ಲ; ತಂತ್ರಜ್ಞಾನದ ಕಾರಣ ಉದ್ಯೋಗಗಳು ಸೃಷ್ಟಿಯಾಗುತ್ತವೆ. "

AI ಮೆಮೊರಿ, ತರ್ಕ ಮತ್ತು ಗಣನೆಯ ಬಗ್ಗೆ, ಮತ್ತು ಈ ವಿಷಯಗಳನ್ನು ಯಾವಾಗಲೂ ಮಾನವರೇ ಪ್ರೋಗ್ರಾಮ್ ಮಾಡಲಾಗುವುದು ಎಂದು ಅವರು ಹೇಳಿದರು.

ವೋಲ್ವೋ ಇಂಡಿಯಾದ MD ಕಮಲ್ ಬಾಲಿ, ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾದ ಮಹತ್ವ ನೀಡಬೇಕಾಗಿದೆ ಎಂದರು. ನಂತರ ಭವಿಷ್ಯದಲ್ಲಿ ಭಾರತೀಯ

ಆಟೋಮೊಬೈಲ್ ವಲಯಕ್ಕೆ ಅವಕಾಶಗಳು, ಸಾಧ್ಯತೆಗಳು ಮತ್ತು ಸವಾಲುಗಳ ಕುರಿತು ಮಾತನಾಡಿದರು. ಭಾರತದ ಕಾರ್ಮಿಕ ವಲಯದಲ್ಲಿ ಕಮಲ್ ಒಂದು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ. "ನಾವು ಭಾರತದಲ್ಲಿ ಸಾಕಷ್ಟು ಮಾನವಶಕ್ತಿಯನ್ನು ಹೊಂದಿದ್ದೇವೆ.ನಾವು ಬದಲಾವಣೆಯನ್ನು ನಿಭಾಯಿಸಲು ಗಮನಹರಿಸಬೇಕು "ಎಂದರು.

ಅಕ್ಸೆನ್‌ಚರ್‌ನ ಹಿರಿಯ ವ್ಯವಸ್ಥಾಪಕ ನಿರ್ದೇಶಕ ನಚಿಕೆತ್ ಸುಖ್‌ತಂಕರ್ ಪ್ರಕಾರ, ಕರ್ನಾಟಕ ಸರ್ಕಾರವು ರಚಿಸಿದ ವೇದಿಕೆಯು ತಂತ್ರಜ್ಞಾನದ ಕೌಶಲ್ಯಗಳನ್ನು, ಭವಿಷ್ಯದ ಉದ್ಯೋಗಗಳನ್ನು, ಯಾಂತ್ರೀಕೃತದ ಪ್ರಭಾವವನ್ನು ಮತ್ತು ತಂತ್ರಜ್ಞಾನವನ್ನು ಒಗ್ಗೂಡಿಸುವ ಮೂಲಕ ಉತ್ತಮ ವ್ಯಾಪಾರದ ಫಲಿತಾಂಶಗಳನ್ನು ಪಡೆಯಬಹುದು.

ಜವಾಬ್ದಾರಿಯುತ AI ಅಭ್ಯಾಸಗಳು ಮತ್ತು ಭವಿಷ್ಯದಲ್ಲಿ ಅಜಾಗರೂಕ AI ಅಭ್ಯಾಸಗಳ ಅಪಾಯಗಳ ಬಗ್ಗೆ ಕೂಡ ಚರ್ಚೆ ಮಾಡಲಾಯಿತು. ಅನಿಯಂತ್ರಿತ AI ಯು ಮಾನವರ ಅಸ್ತಿತ್ವವಕ್ಕೆ ಬೆದರಿಕೆಯಾಗಬಹುದೆಂದು ಕೂಡ ಅಭಿಪ್ರಾಯ ಪಡಲಾಯಿತು.