ಪೆಟ್ರೋಲ್, ಡಿಸೇಲ್ ಬಳಕೆಗೆ ಬೈಬೈ- ಬಯೋ ಡಿಸೇಲ್ಗೆ ಹಾಯ್ ಹಾಯ್..!
ಟೀಮ್ ವೈ.ಎಸ್. ಕನ್ನಡ
Tuesday July 05, 2016,
2 min Read
ಪೆಟ್ರೋಲ್ ಮತ್ತು ಡಿಸೇಲ್ಗಳ ಬಳಕೆಯನ್ನು ಕಡಿಮೆ ಮಾಡಬೇಕು ಅನ್ನೋ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದ್ರೆ ಪೆಟ್ರೋಲ್, ಡಿಸೇಲ್ ಬಳಸದೆ ಗಾಡಿ ಮುಂದಕ್ಕೆ ಹೋಗಾದಾದ್ರೂ ಹೇಗೆ ಅಲ್ವಾ..? ಪೆಟ್ರೋಲ್ ಅಥವಾ ಡಿಸೇಲ್ಗೆ ಪರ್ಯಾಯವಾಗಿರುವ ಇಂಧನವಾದ್ರೂ ಏನು..? ಈ ಪ್ರಶ್ನೆಗಳಿಗೆಲ್ಲಾ ಸದ್ಯಕ್ಕೆ ಉತ್ತರ ಸಿಗುವುದಿಲ್ಲ.
ಈ ಮಧ್ಯೆ ದೇಶದ ನಂಬರ್ ವನ್ ಸಾರಿಗೆ ಸಂಸ್ಥೆ ಕೆಎಸ್ಆರ್ಟಿಸಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ. ತನ್ನ ಹೈಟೆಕ್ ಬಸ್ ಒಂದಕ್ಕೆ ಬಯೋ ಡಿಸೇಲ್ ಅನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿದೆ. ಬೆಂಗಳೂರು- ಚೆನ್ನೈ ನಡುವೆ ಸಂಚರಿಸುವ ಐರಾವತ ಕ್ಲಬ್ ಕ್ಲಾಸ್ ಬಸ್ಗೆ ಬಯೋ ಜೈವಿಕ ಇಂಧನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಅಂದಹಾಗೇ, ಈ ಬಸ್ಗೆ ಪೂರ್ತಿಯಾಗಿ ಜೈವಿಕ ಇಂಧವನ್ನು ಬಳಸಿಕೊಂಡಿಲ್ಲ. ಮಾಮೂಲಿ ಡಿಸೇಲ್ ಶೇ 80ರಷ್ಟಿದ್ದರೆ, ಬಯೋ ಡಿಸೇಲ್ನ್ನು ಶೇ. 20ರಷ್ಟನ್ನು ಬಳಸಿಕೊಳ್ಳಲಾಗಿದೆ.
ಬಯೋ ಡಿಸೇಲ್ ಬಸ್ಗಳನ್ನು ಬಳಸಿಕೊಳ್ಳುವುದರಿಂದ ಕೆಎಸ್ಆರ್ಟಿಸಿಗೆ ಸಾಕಷ್ಟು ಲಾಭವಿದೆ. ವಾಯಮಾಲಿನ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುವ ಪ್ರಯತ್ನವೂ ಇದಾಗಿದೆ. ಬಯೋ ಡಿಸೇಲ್ ಬಳಕೆ ಸುಲಭವಾದ್ರೆ, ಇದು ಮಾಮೂಲಿ ಡಿಸೇಲ್ಗಿಂತ ಒಂದು ಲೀಟರ್ಗೆ 5 ರೂಪಾಯಿ ಕಡಿಮೆ ದರದಲ್ಲಿ ಸಿಗಲಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಇಕೆಎಸ್ಆರ್ಟಿಸಿ ಮತ್ತು ಎನ್ಡಬ್ಲ್ಯು ಕೆಎಸ್ಆರ್ಟಿಸಿ ಒಟ್ಟು ಸೇರಿ ಒಟ್ಟು 5.43 ಲಕ್ಷ ಲೀಟರ್ ಡಿಸೇಲ್ನ್ನು ಒಂದು ವರ್ಷಕ್ಕೆ ಬಳಸಿಕೊಳ್ಳುತ್ತಿದೆ. ಕೆಎಸ್ಆರ್ಟಿಸಿ ಒಂದೇ ಸುಮಾರು 2.1 ಲಕ್ಷ ಲೀಟರ್ ಡಿಸೇಲ್ ಅನ್ನು ಬಳಸಿಕೊಳ್ಳುತ್ತಿದೆ.
ಇದನ್ನು ಓದಿ: 63 ವರ್ಷದ ವೃದ್ಧನಿಗಿರುವ ಕಳಕಳಿ ನಮಗೇಕಿಲ್ಲ..?
ಸದ್ಯಕ್ಕೆ ಈ ಪ್ರಾಜೆಕ್ಟ್ನ್ನು ಪೈಲಟ್ ಪ್ರಾಜೆಕ್ಟ್ ಆಗಿ ಪ್ರಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 10 ಬಸ್ಗಳಿಗೆ ಬಯೋ ಡಿಸೇಲ್ ಪ್ರಯೋಗ ಮಾಡಲಾಗುತ್ತದೆ. ಬಯೋ ಡಿಸೇಲ್ ಮಾದರಿ ಯಶಸ್ಸು ಕಂಡರೆ ವಾಯುಮಾಲಿನ್ಯವನ್ನು ತಡೆಯುವ ಕಾರ್ಯಕ್ಕೆ ದೊಡ್ಡ ಬ್ರೇಕ್ ಸಿಗುತ್ತದೆ.
“ ಇದು ಪೈಲಟ್ ಪ್ರಾಜೆಕ್ಟ್. ಭವಿಷ್ಯದಲ್ಲಿ ಇದನ್ನು 17 ಡಿಪೋದ 17000 ಬಸ್ಗಳಿಗೆ ಬಯೋ ಡಿಸೇಲ್ನ್ನು ಬಳಸುವ ಯೋಜನೆ ಇದೆ. ನಮ್ಮಲ್ಲಿ ಜೈವಿಕ ಇಂಧನ ಬೇಕಾಗುವಷ್ಟಿದೆ. ಕೆಎಸ್ಆರ್ಟಿಸಿ ಇಡೀ ದೇಶದಲ್ಲೇ ಹೊಸ ಪ್ರಯೋಗ ಮಾಡಿದೆ.”
- ರಾಜೇಂದ್ರ ಕುಮಾರ್ ಕಠಾರಿಯಾ,ಎಂ.ಡಿ. ಕೆ.ಎಸ್.ಆರ್.ಟಿ.ಸಿ
ಡಿಸೇಲ್ ಬಸ್ಗಳಲ್ಲಿ ಹೆಚ್ಚು ಹೊಗೆ ಹೊರಬರುವುದು ಸಾಮಾನ್ಯ. ಆದ್ರೆ ಬಯೋ ಡಿಸೇಲ್ ಬಸ್ನಲ್ಲಿ ಇದರ ಪ್ರಮಾಣ ಕಡಿಮೆ ಆಗಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತಿದಿನ 1.5 ಲಕ್ಷ ಬಸ್ಗಳನ್ನು ರಸ್ತೆಗಿಳಿಸುತ್ತದೆ. ಕೋಟ್ಯಾಂತರ ಜನರು ಪ್ರತಿದಿನ ಬಸ್ನಲ್ಲಿ ಸಂಚರಿಸುತ್ತಾರೆ. ಒಟ್ಟಿನಲ್ಲಿ ದೇಶದ ನಂಬರ್ ವನ್ ಸಾರಿಗೆ ಸಂಸ್ಥೆಯಾಗಿರುವ ಕೆಎಸ್ಆರ್ಟಿಸಿ ಪ್ರಯೋಗದ ವಿಚಾರದಲ್ಲೂ ನಂಬರ್ ವನ್ ಆಗಿರೋದು ಸಂತಸದ ವಿಚಾರ.
1. ಪ್ರಯಾಣಕ್ಕಾಗಿ ಮನೆಯನ್ನೇ ಮಾರಿದ್ರು.. ಹವ್ಯಾಸದಿಂದ ಕೋಟ್ಯಾಧಿಪತಿಗಳಾದ್ರು..!
2. ಮೂಕಪ್ರಾಣಿಗಳ ನೋವಿಗೆ ಸ್ಪಂದಿಸಿದ ಹೃದಯವಂತ : ಎಲ್ಲರಿಗೂ ಮಾದರಿ ಬಾಲಿವುಡ್ ನಟನ ಔದಾರ್ಯ
3. ಹಿರಿಜೀವಗಳ ಬದುಕಲ್ಲಿ ಆಶಾಕಿರಣ - ಸಂಗಾತಿ ಆಯ್ಕೆಗಾಗಿ ವಿವಾಹ ವೇದಿಕೆ