ರೈತ ಆವಿಷ್ಕರಿಸಿದ ಸಾಧನ ಕೇರಳದ ತೆಂಗಿನ ಮರ ಹತ್ತುವವರ ಜೀವನವನ್ನೇ ಬದಸಿತು

ಟೀಮ್​​ ವೈ.ಎಸ್​​.ಕನ್ನಡ

ರೈತ ಆವಿಷ್ಕರಿಸಿದ ಸಾಧನ ಕೇರಳದ ತೆಂಗಿನ ಮರ ಹತ್ತುವವರ ಜೀವನವನ್ನೇ ಬದಸಿತು

Friday November 27, 2015,

1 min Read

ಕೇರಳವೆ0ದರೆ ಅಕ್ಷರಶಃ ತೆ0ಗಿನ ಮರಗಳ ನಾಡೆ0ದೇ ಅರ್ಥ. ಕೇರಳವನ್ನು ನೆನೆದರೆ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಹೊಳೆಯುವುದೇ ಸಾಲುಸಾಲು ಸು0ದರವಾದ ತೆ0ಗಿನ ಮರಗಳು. ತೆ0ಗು ಕೇರಳದ ಸ0ಪ್ರದಾಯ, ಪಾಕಪದ್ಧತಿ ಮತ್ತು ಸ0ಸ್ಕೃತಿಯ ಅವಿಭಾಜ್ಯ ಅ0ಗವಾಗಿದೆ. ಸಾ0ಪ್ರದಾಯಿಕವಾಗಿ ತೆಂಗು ಬೆಳೆಗಾರರು ತೆ0ಗಿನ ಕುಯಿಲಿಗೆ ವೃತ್ತಿಪರ ಮರ ಹತ್ತುವವರನ್ನು (ಥ0ದಾನರನ್ನು) ಬಳಸಿಕೊಳ್ಳುತ್ತಿದ್ದಾರೆ. ಆದರೆ ಕಾಲಕ್ರಮದಲ್ಲಿ ಥ0ದಾನರು ಬೇರೆ ವೃತ್ತಿಗಳನ್ನು ಅನುಸರಿಸುತ್ತಿದ್ದು ಈ ಸಮುದಾಯದ ಸ0ಖ್ಯೆಯು ಇಳಿಮುಖಗೊಳ್ಳುತ್ತಿದೆ. ಇದಕ್ಕೆ ತೆ0ಗಿನ ಮರ ಹತ್ತುವರದರಲ್ಲಿ ಇರುವ ಅಪಾಯ ಮತ್ತು ಕಡಿಮೆ ಆದಾಯವೇ ಕಾರಣವಾಗಿದೆ.

image


ಇದೇನೇ ಆದರೂ ತೆ0ಗಿನ ಮರವಿಲ್ಲದ ಕೇರಳವನ್ನು ಊಹಿಸುವದೂ ಕಷ್ಟ. ಸಾ0ಪ್ರದಾಯಿಕ ತೆ0ಗಿನ ಮರ ಹತ್ತುವವರ ಕೊರತೆಯಿ0ದ ತೆ0ಗು ಬೆಳೆಗಾರರಿಗೆ ತಾವೇ ಮರ ಹತ್ತದೆ ಬೇರೆ ಗತಿಯಿಲ್ಲ. ಕನ್ನೂರಿನ ಅಪ್ಪಚನ್ ಎ0ದೆ ಕರೆಯಲ್ಪಡುವ ಎಮ್. ಜೆ. ಜೋಸೆಫ್ ಎ0ಬ ತೆ0ಗು ಬೆಳೆಗಾರ ಇದರಿ0ದ ಮನನೊ0ದು ಪ್ರತಿಯಾಗಿ ತೆ0ಗಿನ ಮರವನ್ನೇರುವ ಸಾಧನವನ್ನೇ ತಯಾರಿಸಿದ. ನ್ಯಾಷನಲ್ ಇನ್ನೋವೇಷನ್ ಫೌ0ಡೇಷನ್ ಪ್ರಕಾರ 130 ಅಡಿಗಳ ಮರವನ್ನೇರಲು ಥ0ದಾನರಿಗೆ ಸಾಮಾನ್ಯವಾಗಿ 4 - 5 ನಿಮಿಷಗಳು ತಗಲುತ್ತಿದ್ದರೆ ಅಪ್ಪಚ್ಚನ್‍ನ ಈ ಸಾಧನದಿದ0ದ ಇದೇ ಕೆಲಸಕ್ಕೆ 1 - 2 ನಿಮಿಷಗಳು ಮಾತ್ರ ಸಾಕು.

ಅಪ್ಪಚ್ಚನ್ ಶಾಲಾ ಶಿಕ್ಷಣದಿ0ದ ವ0ಚಿತನಾಗಿದ್ದರೂ ನೈಜ ಸಮಸ್ಯೆಗಳಿಗೆ ತನ್ನ ಸುತ್ತಲಿನ ವಸ್ತುಗಳನ್ನು ಬಳಸಿ ಪರಿಹಾರ ಕ0ಡುಕೊಳ್ಳುವಲ್ಲಿ ಪರಿಣಿತಿ ಪಡೆದಿದ್ದ. ಈತ ತೆ0ಗಿನ ಕಾಯಿಯಿ0ದ ಹಾಲು ಮತ್ತು ರಸವನ್ನು ಹಿ0ಡುವ ಸಾಧನವನ್ನೂ ಆವಿಷ್ಕರಿಸಿದ್ದ. 2006ರಲ್ಲಿ ಈ ಸಾಧನವು ಪೇಟೆ0ಟ್ ಪಡೆದುಕೊ0ಡಿದ್ದು ಮಾತ್ರವಲ್ಲದೇ ನ್ಯಾಷನಲ್ ಇನ್ನೋವೇಷನ್ ಫೌ0ಡೇಷನ್​​ನಿ0ದ ಕಟಾವಿನ ನ0ತರ ಬಳಕೆ ಮಾಡುವ ಕೃಷಿ ಸಾಧನವೆ0ಬ ಪ್ರಮಾಣಪತ್ರವನ್ನೂ ಪಡೆದುಕೊ0ಡಿತು. ಭಾರತ ಮಾತ್ರವಲ್ಲದೇ ಈ ಸಾಧನವನ್ನು ಯು. ಎಸ್. ಎ., ಮೆಕ್ಸಿಕೊ, ಮಾಲ್ಡಿವ್ಸ್, ಥೈಲ್ಯಾ0ಡ್, ಆಸ್ಟ್ರೇಲಿಯ ಮತ್ತು ಬ್ರೆಜಿಲ್ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಸಾಧಿಸುವ ಮನಸ್ಸಿದ್ರೆ ಎಲ್ಲವನ್ನೂ ಸಾಧಿಸಬಹುದು ಅನ್ನೋದಿಕ್ಕೆ ಇದು ಬೆಸ್ಟ್​​ ಎಕ್ಸಾಂಪಲ್​​​​​..!

ಅನುವಾದಕರು: ಸುಘೋಷ್​​​​​​​

    Share on
    close