ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ

ಟೀಮ್ ವೈ.ಎಸ್.ಕನ್ನಡ 

ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ

Monday August 22, 2016,

2 min Read

ಕರ್ಸನ್​ಭಾಯಿ ಪಟೇಲ್ ತಮ್ಮ ಪುತ್ರಿ ನಿರ್ಮಾಳನ್ನು ಕಾರು ಅಪಘಾತದಲ್ಲಿ ಕಳೆದುಕೊಂಡ್ರು. ತಮ್ಮ ಮಗಳಂತೇ ಪ್ರೀತಿಸುತ್ತಿದ್ದ ಹೊಚ್ಚ ಹೊಸ ಬ್ರಾಂಡ್​ಗೆ ಪುತ್ರಿ ನಿರ್ಮಾಳ ಹೆಸರನ್ನೇ ಇಡಲು ನಿರ್ಧರಿಸಿದ್ರು. ಇವತ್ತು ''ಸಬ್​ಕಿ ಪಸಂದ್ ನಿರ್ಮಾ'' ಅನ್ನೋ ಜಾಹೀರಾತನ್ನು ಎಲ್ಲರೂ ಗುನುಗ್ತಾರೆ. ಹಿಂದೊಮ್ಮೆ ಕರ್ಸನ್ಭಾಯಿ ಮನೆ ಮನೆಗೆ ಹೋಗಿ ಮಾರುತ್ತಿದ್ದ ಉತ್ಪನ್ನ ಈಗ ಸಾಬೂನು ಮಾರುಕಟ್ಟೆಯಲ್ಲಿ ಶೇ.20ರಷ್ಟು ಪಾಲು ಹೊಂದಿದೆ. ಡಿಟರ್ಜೆಂಟ್ ಮಾರುಕಟ್ಟೆಯಲ್ಲೂ ಶೇ.35ರಷ್ಟು ಪಾಲು ನಿರ್ಮಾ ಬ್ರಾಂಡ್​ನದ್ದು. 

ಕರ್ಸನ್​ಭಾಯಿ 1969ರಲ್ಲಿ ನಿರ್ಮಾ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ರು. ಆಗ ಸೋಪ್ ಮತ್ತು ಡಿಟರ್ಜೆಂಟ್ ಮಾರ್ಕೆಟ್ನಲ್ಲಿ ಹೆಚ್ಚು ಕಂಪನಿಗಳೇನೂ ಇರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳೇ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಬಡವರು ಹಾಗೂ ಮಧ್ಯಮವರ್ಗದವರಿಗೆ ಸಾಬೂನು ಮತ್ತು ಡಿಟರ್ಜೆಂಟ್ ಕೈಗೆಟುಕದ ವಸ್ತುವಾಗಿತ್ತು. ಅಹಮದಾಬಾದ್​ನ ಖೋಕ್ರಾ ಬಳಿ ಇರುವ ತಮ್ಮ ಮನೆಯ ಒಂದು ಬದಿಯಲ್ಲಿ ಕರ್ಸನ್​ಭಾಯಿ ಡಿಟರ್ಜೆಂಟ್ ಪೌಡರ್ ತಯಾರಿಸಲು ಆರಂಭಿಸಿದ್ರು. ಅದನ್ನು ಮನೆಮನೆಗೆ ಹೋಗಿ 3 ರೂಪಾಯಿಗೆ ಪ್ರತಿ ಕೆಜಿಯಂತೆ ಮಾರಾಟ ಮಾಡ್ತಾ ಇದ್ರು. ಆಗ ಉಳಿದ ಬ್ರಾಂಡ್ಗಳ ಬೆಲೆ ಕೆಜಿಗೆ 13 ರೂಪಾಯಿ ಇತ್ತು.

80ರ ದಶಕದಲ್ಲಿ ಸೇಲ್ಸ್ ಇಲ್ಲದೆ ನಿರ್ಮಾ ಕಂಗಾಲಾಗಿತ್ತು. ಆಗ ಬುದ್ಧಿವಂತಿಕೆಯಿಂದ ಬಾಕಿ ವಸೂಲಿ ಮಾಡಿದವರು ಇದೇ ಕರ್ಸನ್​ಭಾಯಿ. ಅಷ್ಟೇ ಅಲ್ಲ ತಮ್ಮ ಪುತ್ರಿ ನಿರ್ಮಾಳನ್ನೇ ಹಾಕಿಕೊಂಡು ಜಾಹೀರಾತೊಂದನ್ನು ನಿರ್ಮಾಣ ಮಾಡಿದ್ರು. ಕರ್ಸನ್​ಭಾಯಿ ಅವರ ಐಡಿಯಾ ಮ್ಯಾಜಿಕ್ ಮಾಡಿತ್ತು. ನಿರ್ಮಾ ಬ್ರಾಂಡ್ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಯ್ತು. ಆ ವರ್ಷ ನಿರ್ಮಾದ ಮಾರಾಟ ಎಷ್ಟಿತ್ತೆಂದ್ರೆ ಅತಿ ಹೆಚ್ಚು ಮಾರಾಟವಾದ ಡಿಟರ್ಜೆಂಟ್ ಎಂಬ ಖ್ಯಾತಿಯನ್ನೂ ಗಳಿಸಿತ್ತು. ಎದುರಾಳಿ ಬ್ರಾಂಡ್ ಸರ್ಫ್ ಆಫ್ ಹಿಂದುಸ್ಥಾನ್ ಯುನಿಲಿವರ್ ಅನ್ನು ಹಿಂದಿಕ್ಕಿತ್ತು.

ಈ ವರ್ಷ ಕರ್ಸನ್​ಭಾಯಿ LafargeHolcimನ ಸಿಮೆಂಟ್ ಬ್ಯುಸಿನೆಸ್ ಅನ್ನು 1.4 ಬಿಲಿಯನ್​ಗೆ ಕೊಂಡುಕೊಳ್ಳುವ ಮೂಲಕ ಮತ್ತೊಮ್ಮೆ ತಾವೊಬ್ಬ ಶ್ರೇಷ್ಠ ಉದ್ಯಮಿ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಈ ಒಪ್ಪಂದದಿಂದ ರಾಜಸ್ತಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಾ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲಿದೆ. ಉದ್ಯಮಿ ಅನ್ನೋ ಪದಕ್ಕೆ ಮತ್ತೊಂದು ಅರ್ಥ ಕರ್ಸನ್​ಭಾಯಿ ಅಂದ್ರೆ ತಪ್ಪಿಲ್ಲ. ಮಾಧ್ಯಮದೆದುರು ಹೆಚ್ಚು ಪ್ರಚಾರ ಪಡೆಯಲು ಇಚ್ಛಿಸದ ನಾಚಿಕೆ ಸ್ವಭಾವದ ವ್ಯಕ್ತಿ ಅವರು. ದೇಶದ ಅಭಿವೃದ್ಧಿ ಬಗೆಗೂ ವಿಶಾಲ ದೃಷ್ಟಿಕೋನ ಹೊಂದಿದ್ದಾರೆ. 1995ರಲ್ಲಿ ನಿರ್ಮಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 2003ರಲ್ಲಿ ನಿರ್ಮಾ ಯೂನಿವರ್ಸಿಟಿ ಆಫ್ ಸೈನ್ಸ್ & ಟೆಕ್ನಾಲಜಿ, ಮತ್ತು ನಿರ್ಮಾ ಎಜುಕೇಶನ್ & ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. ಭಾರತದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ತರಬೇತಿ ನೀಡಲು 2004ರಲ್ಲಿ ನಿರ್ಮಾ ಲ್ಯಾಬ್ಸ್ ಎಜುಕೇಶನ್ ಪ್ರಾಜೆಕ್ಟ್ ಅನ್ನು ಕೂಡ ಆರಂಭಿಸಿದ್ದಾರೆ. 2010ರಲ್ಲಿ ಕರ್ಸನ್​ಭಾಯಿ ಪಟೇಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ..

ಜನಸೇವಕ, ಗಾಂಧಿವಾದಿ ಅಣ್ಣಾ ಹಜಾರೆ ಅವರ ಜೀವನಗಾಥೆ..

‘ಬಿ-ಸೇಫ್’ ಆ್ಯಪ್​ ಬಳಸಿ, ಸುಗಮವಾಗಿ ಆಟೋದಲ್ಲಿ ಪ್ರಯಾಣಿಸಿ